ನನ್ನ ಬಗ್ಗೆ ಮಲೆನಾಡ ಹುಡುಗ ,ನಾಲ್ಕು ಮನೆ ಇರೋ ಒಂದು ಚಿಕ್ಕ ಚೊಕ್ಕ ಊರು, ಹೆಸರು ಒಂತರಾ ವಿಚಿತ್ರ ಹಾರೋಗೊಪ್ಪ ಅಂತ ಯಾರು ಹಾರ್ಕೊಂಡು ಬಂದು ಹೆಸರು ಇಟ್ರೊ ಗೊತ್ತಿಲ್ಲ ನನ್ನ ಇನಿಶಿಯಲ್ ಜೊತೆ ಸೇರ್ಕೊಂಡಿದೆ. ಉತ್ತಮ ಬರಹಗಾರ ನಾನಂತೂ ಅಲ್ಲವೇ ಅಲ್ಲ ಸಮಯ ಸಿಕ್ಕಾಗ ಸಿಕ್ಕಿದ್ದು ಗೀಚುವ ಉಸಾಬರಿ ನನಗೆ, ಬದುಕಿನ ಏರು ಪೇರಿನಲ್ಲಿ ಹಳೆಯ ಬೇರು ಹುಡುಕುತ ನನ್ನ ಬರವಣಿಗೆ ಸಾಲುಗಳು ಸಾಗ್ತಾ ಇವೆ......
Friday, 30 March 2018
Thursday, 29 March 2018
ಮೂಕ ಕಲ್ಪನೆ
ಹಿತವ ಹಿಡೊಯೋ ಮನವೇ
ಮೂಕವಾಗಿ ಕುಂತೆಯಲ್ಲೇ
ಕಣ್ಣು ಮುಚ್ಚಿ ಸುಮ್ಮನೆ ಕಾಣು
ಹೊಸ ಕನಸ ಮೆರವಣಿಗೆ
ಬಂದಿಯಾಗೋ ಮನಸ್ಸೇ
ಬದಿಗೆ ಸರಿದು ಸೊರಗಿದೆ
ಚಿಲುಮೆ ಕೊಟ್ಟು ಜೀವ
ಉಳಿಸು ಮೃತ್ಯು ಪತನಕೆ
ಮೂಕವಾಗಿ ಕುಂತೆಯಲ್ಲೇ
ಕಣ್ಣು ಮುಚ್ಚಿ ಸುಮ್ಮನೆ ಕಾಣು
ಹೊಸ ಕನಸ ಮೆರವಣಿಗೆ
ಬಂದಿಯಾಗೋ ಮನಸ್ಸೇ
ಬದಿಗೆ ಸರಿದು ಸೊರಗಿದೆ
ಚಿಲುಮೆ ಕೊಟ್ಟು ಜೀವ
ಉಳಿಸು ಮೃತ್ಯು ಪತನಕೆ
Friday, 23 March 2018
ನನ್ನ ಬಾಳ ಚಿಲುಮೆಯ ಪುಸ್ತಕ
ಸುಮ್ಮನೆ ನಿಂತಿದ್ದ ಹೃದಯ ಹೊಸ
ಕಥೆಯ ಕೆತ್ತನೆಗೆ ಬೆರಳುಗಳ ಸರಿಸುತ್ತಿದೆ
ಕಣ್ಣ ರೆಪ್ಪೆಯ ಮೀಡಿತಗಳೇ ಪದಗುಂಜಗಳು
ಕೈಜಾರದೇ ಮೆಲ್ಲನೆ ಹೃದಯ ಸೇರಲಿ
ನನ್ನ ಬಾಳ ಚಿಲುಮೆಯ ಪುಸ್ತಕ
ಕಥೆಯ ಕೆತ್ತನೆಗೆ ಬೆರಳುಗಳ ಸರಿಸುತ್ತಿದೆ
ಕಣ್ಣ ರೆಪ್ಪೆಯ ಮೀಡಿತಗಳೇ ಪದಗುಂಜಗಳು
ಕೈಜಾರದೇ ಮೆಲ್ಲನೆ ಹೃದಯ ಸೇರಲಿ
ನನ್ನ ಬಾಳ ಚಿಲುಮೆಯ ಪುಸ್ತಕ
Wednesday, 14 March 2018
ಏಕಾಂಗಿತನವೇ ನನ್ನ ಕೈಸೇರಿದೆ ಮೌನಕ್ಕೆ ಗಂಟುಬಿದ್ದು
ಹೊಸ ಕಥೆಯ ಬರೆಯುವೆ ನಿನ್ನ ನೆನಪಲ್ಲಿ
ಹೆಕ್ಕಿ ತರುವೆನು ಪದಗಳನ್ನು ನನ್ನೆದೆಯ ಜೋಪಡಿಯಿಂದ
ಭಾವನೆಗಳ ಗೂಡಿಗೆ ಬೇಲಿ ಹಾಕಿ ಸದಾ ಕಾಯುವೆನು
ಏಕಾಂಗಿತನವೇ ನನ್ನ ಕೈಸೇರಿದೆ ಮೌನಕ್ಕೆ ಗಂಟುಬಿದ್ದು
ಹೆಕ್ಕಿ ತರುವೆನು ಪದಗಳನ್ನು ನನ್ನೆದೆಯ ಜೋಪಡಿಯಿಂದ
ಭಾವನೆಗಳ ಗೂಡಿಗೆ ಬೇಲಿ ಹಾಕಿ ಸದಾ ಕಾಯುವೆನು
ಏಕಾಂಗಿತನವೇ ನನ್ನ ಕೈಸೇರಿದೆ ಮೌನಕ್ಕೆ ಗಂಟುಬಿದ್ದು
Tuesday, 13 March 2018
ಸುಂದರ ಚಂದಿರ ಬರುವನು ತಿಂಗಳಿಗೊಮ್ಮೆ
ಸುಂದರ ಚಂದಿರ ಬರುವನು ತಿಂಗಳಿಗೊಮ್ಮೆ
ನನ್ನ ಚಲುವೆ ಬೆಳಕ ಬೀರುತಿಹಳು ಪ್ರತಿದಿನವೂ
ಕೊನೆಪಕ್ಷ ಚಂದಿರನಾದರೂ ಗಮನಿಸಬಾರದೇ
ಅವನಿಗಾದರು ಸಿಗುತಿತ್ತು ಒಂದು ದಿನದ ವಿಶ್ರಾಂತಿ
ನನ್ನ ಚಲುವೆ ಬೆಳಕ ಬೀರುತಿಹಳು ಪ್ರತಿದಿನವೂ
ಕೊನೆಪಕ್ಷ ಚಂದಿರನಾದರೂ ಗಮನಿಸಬಾರದೇ
ಅವನಿಗಾದರು ಸಿಗುತಿತ್ತು ಒಂದು ದಿನದ ವಿಶ್ರಾಂತಿ
ಪ್ರತಿ ಕಣ್ಣಿರಿಗೂ ಬರೆಯುವೆ ಕಾದಂಬರಿ
ನಿನ್ನ ಪ್ರತಿ ಕಣ್ಣಿರಿಗೂ ಬರೆಯುವೆ ಕಾದಂಬರಿ
ಕನಸಲ್ಲೂ ಒದ್ದೆ ಆಗದ ಹಾಗೆ ಕಾಪಾಡುವೆನು
ನಿನ್ನ ಬೃಂದಾವನದ ರಾಣಿಯಾಗಿ ರಾರಾಜಿಸದಿದ್ದರು
ಪ್ರೀತಿಯ ಗುಡಿಸಲಿನಲ್ಲಿ ಸದಾ ಜ್ಯೋತಿಯಂತೆ ಬೆಳಗಿಸುವೆನು
ಕನಸಲ್ಲೂ ಒದ್ದೆ ಆಗದ ಹಾಗೆ ಕಾಪಾಡುವೆನು
ನಿನ್ನ ಬೃಂದಾವನದ ರಾಣಿಯಾಗಿ ರಾರಾಜಿಸದಿದ್ದರು
ಪ್ರೀತಿಯ ಗುಡಿಸಲಿನಲ್ಲಿ ಸದಾ ಜ್ಯೋತಿಯಂತೆ ಬೆಳಗಿಸುವೆನು
Monday, 12 March 2018
ರೈತನ ಮಗ
ನನ್ನೊಬ್ಬ ರೈತನ ಮಗ ಹೆಮ್ಮೆಯಿಂದ
ಮೀಸೆ ತಿರುಗಿಸಿ ಹೇಳೆವೆ ಅಂಬಲಿ
ಉಂಡರು ಅಂಬಾರಿಗೂ ಮೀಗಿಲಾದ
ಸುಖವುಂಟು ನನಗೆ ನೆಮ್ಮದಿಯುಂಟು
ನನ್ನ ಬೆವರಲ್ಲಿದೆ ಮೂರು ಹೊತ್ತಿನ
ತುತ್ತು ಯಾರಿಗೂ ಅಂಜ ಬೇಕಿಲ್ಲ
ಸ್ವಾಭಿಮಾನದ ಕಣಜವೇ ಹೋತ್ತಿಹೆವು
ಸುಮ್ಮನೆ ಕೂರುವವರಲ್ಲ ಕಾಲಹರಣ ಮಾಡದೇ
ನನ್ನೊಬ್ಬ ರೈತನ ಮಗ ಗತ್ತಿನಿಂದ
ಬದುಕುವೆ ಕಿತ್ತು ತಿನ್ನುವ ಅಹಂಕಾರ
ನಮಗಿಲ್ಲಉಂಡ ಮನೆಗೆ ದ್ರೋಹ ಮಾಡೋ
ಪರದೇಸಿ ಬಾಳ್ವೆ ನಮ್ಮದಲ್ಲ ಬೆವರ ಹನಿಯಲ್ಲಿದೆ ನಮ್ಮ ಬದುಕು
ಭೂಮಿ ತಾಯ ಹಸಿರ ಕಾಯೋ
ಮಣ್ಣಿನ ಮಗ ನೊಗವ ಹೊತ್ತು ನೋವು ಉಂಡು
ಹಸಿರ ಕಣಜದಲ್ಲಿ ಖುಷಿಯ ಕಣೋ ಅಲ್ಪ ತೃಪ್ತ
ಜೀವನ ರಥವು ನಡೆಯುತಿಹುದು ಬಿಡುವು ಇಲ್ಲದೆ
ಮೀಸೆ ತಿರುಗಿಸಿ ಹೇಳೆವೆ ಅಂಬಲಿ
ಉಂಡರು ಅಂಬಾರಿಗೂ ಮೀಗಿಲಾದ
ಸುಖವುಂಟು ನನಗೆ ನೆಮ್ಮದಿಯುಂಟು
ನನ್ನ ಬೆವರಲ್ಲಿದೆ ಮೂರು ಹೊತ್ತಿನ
ತುತ್ತು ಯಾರಿಗೂ ಅಂಜ ಬೇಕಿಲ್ಲ
ಸ್ವಾಭಿಮಾನದ ಕಣಜವೇ ಹೋತ್ತಿಹೆವು
ಸುಮ್ಮನೆ ಕೂರುವವರಲ್ಲ ಕಾಲಹರಣ ಮಾಡದೇ
ನನ್ನೊಬ್ಬ ರೈತನ ಮಗ ಗತ್ತಿನಿಂದ
ಬದುಕುವೆ ಕಿತ್ತು ತಿನ್ನುವ ಅಹಂಕಾರ
ನಮಗಿಲ್ಲಉಂಡ ಮನೆಗೆ ದ್ರೋಹ ಮಾಡೋ
ಪರದೇಸಿ ಬಾಳ್ವೆ ನಮ್ಮದಲ್ಲ ಬೆವರ ಹನಿಯಲ್ಲಿದೆ ನಮ್ಮ ಬದುಕು
ಭೂಮಿ ತಾಯ ಹಸಿರ ಕಾಯೋ
ಮಣ್ಣಿನ ಮಗ ನೊಗವ ಹೊತ್ತು ನೋವು ಉಂಡು
ಹಸಿರ ಕಣಜದಲ್ಲಿ ಖುಷಿಯ ಕಣೋ ಅಲ್ಪ ತೃಪ್ತ
ಜೀವನ ರಥವು ನಡೆಯುತಿಹುದು ಬಿಡುವು ಇಲ್ಲದೆ
Subscribe to:
Posts (Atom)
ಸಂತೆ
ನನ್ನ ಬಾಳಾಟದ ಸಂತೆಯಲ್ಲಿ ತರಹ ತರಹದ ಸ್ವಪ್ನಗಳು ನಂಟಿನ ಬುತ್ತಿಯಲ್ಲಿ ಅಲ್ಲೊಂದು ಇಲ್ಲೊಂದು ಸಿಹಿ ನೆನಪುಗಳು ವ್ಯಾಪಾರ ನಾನಾದೆ ವ್ಯವಹಾರ ಮಾಡದೆ ಕೊಂಡವರು ...
-
ಜಯಿಸೋ ದಾರಿ ಮುಂದೆ ನಿಂತಿದೆ ಹಿಂದೆ ನಿಂತರೆ ಹಿಂದೆ ಉಳಿವೆ ಕಂಡ ಕನಸ್ಸು ಪೂರ್ಣ ಗೊಳಿಸು ಸಾಧನೆ ಸೂರಿಗೆ ನಿನ್ನದೇ ಹಂಚು ಮರೆತು ಬಿಡು ಹಳೆಯ ಸೋಲು ನೋವು ನುಂಗಿ ...
-
ಹಸಿರಿನ ಸಿರಿಯಲ್ಲಿ ನೆನಪಾಗಿದೆ ಬಾಲ್ಯದ ಉಸಿರು ಕಣ ಕಣವು ಹಾತೊರೆಯುತ್ತಿದೆ ಬಾಲ್ಯವೇ ಬಂದು ಬಿಡು ಮಗದೊಮ್ಮೆ ಆನಂದಿಸುವೆ ಪ್ರತಿ ಕ್ಷ್ಯಣವು ನಿನ್ನೊಂದಿಗೆ ನನ್ನನ್ನೇ ಮರೆ...
-
ನೂರೆಂದು ನಂಟು ಖಾಲಿ ಜೇಬಿನ ಪ್ಯಾಂಟಿನಲ್ಲಿ ಬಗೆದಷ್ಟೂ ನೋವು ಖಾಲಿ ಜೇಬಿನ ಪ್ಯಾಂಟಿನಲ್ಲಿ ಹೊಸ ಉತ್ಸಾಹದ ಚಿಲುಮೆ ಖಾಲಿ ಜೇಬಿನ ಪ್ಯಾಂಟು ಯೋಚನೆಗೆ ಯೋಜನೆಗೆ ರಹದಾರಿ ...


